Wednesday, October 2, 2024

ವಾಟ್ಸಾಪ್ ವಿಷ

ದಾನವರಿಗೆ ಅಮೃತ ಸಿಗಲಿಲ್ಲ 
ಕಷ್ಟ ಪಟ್ಟಿದ್ದರು 
ಗಳಿಸಿದ್ದರು 
ದೇವರು ಮೋಸಗಾರ 

ಇಂದಿನ ಮಾನವರಿಗೆ 
ಫೋನಿಗೆ ಬಂದಿದ್ದೆಲ್ಲಾ ಮಾಹಿತಿ 
ಅಭಿಪ್ರಾಯವ ಒಪ್ಪಿದವರೆಲ್ಲಾ 
ಸಹೋದರರು 

ಸುಳ್ಳನ್ನಷ್ಟೇ ಬಿತ್ತಲಾಗುತ್ತಿದೆ 
ವಿಷವನ್ನಷ್ಟೇ ಹರಡಲಾಗುತ್ತಿದೆ 
ಭೇದವನ್ನೇ ಬೆಳೆಸಲಾಗುತ್ತಿದೆ 
ಮೆದುಳನ್ನ ತೊಳೆದಾಗಿದೆ 

ಸುಳ್ಳು ರಂಜಕವಾಗಿದ್ದರೆ 
ಮನಸಿಗೆ ಆಪ್ತವಾದರೆ 
ನಂಬಿಕೆಯ ಧೃಡಗೊಳಿಸಿದರೆ 
ಸತ್ಯವನ್ನಾರು ಹುಡುಕುತ್ತಾರೆ, ನಂಬುತ್ತಾರೆ? 

ಸಾಯುವ ಕಾಲಕ್ಕೆ 
ಶಾಂತಿ ಇರುವುದಿಲ್ಲ 
ಹಣವಂತರು ಹೆಣಗಳ ಮೇಲೆ ಕುಣಿವಾಗ 
ಸಾಯಲು ಸಾಲು ನಿಂತವರು 
ಜಾತಿ, ಧರ್ಮವೆಂದು ಹೊಡೆದಾಡಿದರೆ 
ಲಾಭವ್ಯಾರಿಗೆ, ಹೇಳಿ 

ಭಾಶೇ 

No comments: